(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ )ಭೂ ಅಕ್ರಮ ಮಂಜೂರಾತಿ ಬಿಗಿಗೊಳಿಸಿದ:ಚಿಕ್ಕಮಗಳೂರು ಜಿಲ್ಲಾಡಳಿತ!


ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ :
ಚಿಕ್ಕಮಗಳೂರು: ಜಿಲ್ಲೆಯ ಕಡೂರು, ಮೂಡಿಗೆರೆ ತಾಲೂಕಿನಲ್ಲಿ ಭೂ ಅಕ್ರಮ ಮಂಜೂರು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಂಜೂರಾತಿ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಬಿಗಿಗೊಳಿಸಿದೆ. ಪ್ರತಿ ಹಂತದಲ್ಲಿ ಬಯೋಮೆಟ್ರಿಕ್‌, ಆನ್‌ಲೈನ್‌ ವ್ಯವಸ್ಥೆಯನ್ನು ಮಾಡಿದೆ.

: ಕಡೂರು ಮತ್ತು ಮೂಡಿಗೆರೆ ತಾಲೂಕಿನ ಭೂ ಅಕ್ರಮ ಮಂಜೂರು ಪ್ರಕರಣಗಳ ಬಗ್ಗೆ ತನಿಖೆ ನಡೆದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಕಾನೂನು ಮೀರಿದರೆ ತೊಂದರೆಗೆ ಸಿಲುಕುವ ಆತಂಕ ಕಾಡುತ್ತಿದೆ. ಭೂ ಸಕ್ರಮೀಕರಣ ಸಮಿತಿ ಕೂಡ ಸುಲಭವಾಗಿ ಮಂಜೂರಾತಿ ನೀಡುತ್ತಿಲ್ಲ. ಭೂ ಮಂಜೂರು ಕೋರಿ ಜಿಲ್ಲೆಯಲ್ಲಿ 1.25 ಲಕ್ಷ ಅರ್ಜಿಗಳಿದ್ದು, ಈ ಪೈಕಿ 500 ಅರ್ಜಿಗಳ ವಿಲೇವಾರಿಯೂ ಕಷ್ಟ ಸಾಧ್ಯ ಎಂದು ಮೂಲಗಳು ತಿಳಿಸಿವೆ.

: ನಮೂನೆ 50, 53 ಮತ್ತು 57ರಲ್ಲಿ ಭೂ ಮಂಜೂರು ಕೋರಿರುವವರು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರಬೇಕು. ಅಷ್ಟರಲ್ಲಿ ಅರ್ಜಿದಾರನಿಗೆ 18 ವರ್ಷ ಪೂರ್ಣಗೊಂಡಿರಬೇಕು, 2002ನೇ ಇಸವಿಗಿಂತ ಮೊದಲೇ ಸಾಗುವಳಿ ಮಾಡುತ್ತಿರಬೇಕು. ಅದರಲ್ಲೂ ಅರ್ಜಿದಾರನೇ ಸಾಗುವಳಿ ಮಾಡುತ್ತಿರಬೇಕು. ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆಗೂ ಹೆಚ್ಚು ಭೂಮಿ ಮಂಜೂರು ಮಾಡುವಂತಿಲ್ಲ. ಸಾಗುವಳಿ ಮಾಡುತ್ತಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಯಿಂದ ವರದಿ ಪಡೆಯಬೇಕು, ನಕ್ಷೆ ಸಿದ್ಧಪಡಿಸಬೇಕು, ಶಾಸಕರ ಅಧ್ಯಕ್ಷತೆಯ ಭೂ ಸಕ್ರಮೀಕರಣ ಸಮಿತಿ ಮುಂದೆ ಮಂಡಿಸಬೇಕು ಎಂಬ ನಿಯಮಗಳನ್ನು ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ.

ನಮೂನೆ 50, 53 ಮತ್ತು 57ರಲ್ಲಿ ಭೂ ಮಂಜೂರು ಕೋರಿರುವವರು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರಬೇಕು. ಅಷ್ಟರಲ್ಲಿ ಅರ್ಜಿದಾರನಿಗೆ 18 ವರ್ಷ ಪೂರ್ಣಗೊಂಡಿರಬೇಕು, 2002ನೇ ಇಸವಿಗಿಂತ ಮೊದಲೇ ಸಾಗುವಳಿ ಮಾಡುತ್ತಿರಬೇಕು. ಅದರಲ್ಲೂ ಅರ್ಜಿದಾರನೇ ಸಾಗುವಳಿ ಮಾಡುತ್ತಿರಬೇಕು. ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆಗೂ ಹೆಚ್ಚು ಭೂಮಿ ಮಂಜೂರು ಮಾಡುವಂತಿಲ್ಲ. ಸಾಗುವಳಿ ಮಾಡುತ್ತಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಯಿಂದ ವರದಿ ಪಡೆಯಬೇಕು, ನಕ್ಷೆ ಸಿದ್ಧಪಡಿಸಬೇಕು, ಶಾಸಕರ ಅಧ್ಯಕ್ಷತೆಯ ಭೂ ಸಕ್ರಮೀಕರಣ ಸಮಿತಿ ಮುಂದೆ ಮಂಡಿಸಬೇಕು ಎಂಬ ನಿಯಮಗಳನ್ನು ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ.

 ಪ್ರಕ್ರಿಯೆ ಪಾರದರ್ಶಕ

ಸಮಿತಿ ಸಭೆಯ ಬಯೋಮೆಟ್ರಿಕ್‌ ಹಾಜರಾತಿ, ಸಭೆಯ ಪೋಟೊ, ಸಾಗುವಳಿ ಜಾಗದ ಚಿತ್ರಗಳನ್ನು ಆ್ಯಪ್‌ನಲ್ಲಿ ಅಪಲೋಡ್‌ ಮಾಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರು ಮಾಡಬೇಕು. ಕಂದಾಯ ಜಾಗವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅರಣ್ಯ ಇಲಾಖೆ ಜಾಗವಾಗಿದ್ದರೆ ಯಾವುದೇ ಕಾರಣಕ್ಕೂ ಮಂಜೂರು ಮಾಡುವಂತಿಲ್ಲ. ಈ ಎಲ್ಲನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿದ್ದ ಆರೋಪದಲ್ಲಿ ಈಗ ಅಧಿಕಾರಿಗಳು ವಿರುದ್ಧ ಕ್ರಮಕ್ಕೂ ಪ್ರಕ್ರಿಯೆಗಳು ಆರಂಭವಾಗಿದೆ. ಆದ್ದರಿಂದ



ಭೂ ಮಂಜೂರಾತಿ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

: ತಂತ್ರಜ್ಞಾನ ಬಳಕೆ

ಬಗರ್‌ಹುಕುಂ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಬಯೋಮೆಟ್ರಿಕ್‌, ಅವರ ಭಾವಚಿತ್ರ ಸಹಿತ ಎಲ್ಲವನ್ನೂ ಅಪ್‌ಲೋಡ್‌ ಮಾಡಲಾಗುತ್ತಿದೆ. ಬಯೋಮೆಟ್ರಿಕ್‌ ಎಲ್ಲಿ ಕುಳಿತು ಮಾಡಿದ್ದಾರೆ ಎಂಬುದು ಕೂಡ ದಾಖಲಾಗುತ್ತಿದೆ. ಎಲ್ಲವೂ ಆನ್‌ಲೈನ್‌ನಲ್ಲಿ ದಾಖಲಾಗುವುದರಿಂದ ಒಂದೇ ಒಂದು ನಿಯಮ ಉಲ್ಲಂಘನೆಯಾದರೂ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತಿದೆ.

: ಭೂ ಮಂಜೂರು ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಯಾವುದೇ ಹಂತದಲ್ಲಿಯೂ ಹಸ್ತಕ್ಷೇಪ ಸಾಧ್ಯವಾಗದಂತೆ ಆನ್‌ಲೈನ್‌ ಮತ್ತು ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಅಕ್ರಮವಾಗಿ ಮಂಜೂರಾತಿ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರಿಗೆ ತೊಂದರೆ ಆಗದಂತೆಯೂ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

1.25 ಲಕ್ಷ ಅರ್ಜಿ ಸಲ್ಲಿಕೆ

ಜಿಲ್ಲೆಯಲ್ಲಿ ಭೂ ಮಂಜೂರು ಕೋರಿರುವ 1.25 ಲಕ್ಷ ಅರ್ಜಿಗಳಿವೆ. ಹೊಸ ನಿಯಮಗಳು ಏನೂ ಇಲ್ಲ, ಹಳೇ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಸಮಿತಿ ಕೂಡ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಆದ್ದರಿಂದ ಎಲ್ಲ ನಿಯಮಗಳು ಪಾಲನೆಯಾದ ಅರ್ಜಿಗಳನ್ನಷ್ಟೇ ಸಮಿತಿ ಪರಿಗಣಿಸುತ್ತಿದೆ. ಅಷ್ಟು ಅರ್ಜಿಗಳಲ್ಲಿ 500 ಅರ್ಜಿಗಳಿಗೆ ಮಂಜೂರಾತಿ ದೊರೆತರೆ ಹೆಚ್ಚು ಎನ್ನುತ್ತಾರೆ ಅಧಿಕಾರಿಗಳು.



PGK

Post a Comment

Previous Post Next Post