(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)ಲೋಕಾಯುಕ್ತ ಭರ್ಜರಿ ಬೇಟೆ; ಜಗನ್ನಾಥ್ ಮನೆಯಲ್ಲಿ 1 ಕೆಜಿಗೂ ಹೆಚ್ಚು ಚಿನ್ನಾಭರಣ, ಬೆಳ್ಳಿ ಪತ್ತೆ..!

ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್..

ಲೋಕಾಯುಕ್ತ ಭರ್ಜರಿ ಬೇಟೆ; ಜಗನ್ನಾಥ್ ಮನೆಯಲ್ಲಿ 1 ಕೆಜಿಗೂ ಹೆಚ್ಚು ಚಿನ್ನಾಭರಣ, ಬೆಳ್ಳಿ ಪತ್ತೆ..!

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಕಳಂಕಿತ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಭ್ರಷ್ಟಾಧಿಕಾರಿಗಳ ಮನೆ, ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಂತೆಯೇ ಕಲಬುರಗಿಯ ಅಧಿಕಾರಿ ಜಗನ್ನಾಥ್ ಮನೆಯಲ್ಲಿ ಖಜಾನೆ ಪತ್ತೆ ಆಗಿದೆ. 1 ಕೆಜಿಗೂ ಹೆಚ್ಚು ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಪತ್ತೆಯಾಗಿದೆ. ಜಮೀನು, ಮನೆ, ಸೇರಿದಂತೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜಗನ್ನಾಥ್ ರಾಜ್ಯ ಹೆದ್ದಾರಿ ಅಭಿವೃಧ್ದಿ ಯೋಜನಾಧಿಕಾರಿ ಆಗಿದ್ದಾರೆ.

ಎಲ್ಲೆಲ್ಲಿ ದಾಳಿ?

  • ಡಿಪಿಎಆರ್ ಚೀಫ್ ಇಂಜಿನಿಯರ್ T.D ನಂಜುಂಡಪ್ಪ
  • BBMP ಎಕ್ಸೀಕ್ಯೂಟಿವ್​ ಇಂಜಿನಿಯರ್ H.B ಕಲ್ಲೇಶಪ್ಪ
  • ಕೋಲಾರ ಟೌನ್ ಬೆಸ್ಕಾಂ ಎಇಇ ಜಿ.ನಾಗರಾಜ್
  • ಕಲಬುರಗಿ ರಾ. ಹೆದ್ದಾರಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ್
  • ದಾವಣಗೆರೆ ಡಿಸ್ಟಿಕ್ ಸ್ಟ್ಯಾಟಿಕಲ್ ಆಧಿಕಾರಿ G.S ನಾಗರಾಜು
  • ತುಮಕೂರು ತಾವರಕೆರೆ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್
  • ಬಾಗಲಕೋಟೆ ಪಂ. ರಾಜ್ ಇಂಜಿನಿಯರಿಂಗ್ FDA ಮಲ್ಲಪ್ಪ ಸಾಬಣ್ಣ
  • ವಿಜಯಪುರ ಹೌಸಿಂಗ್ ಬೋರ್ಡ್ FDA ಶಿವಾನಂದ್ ಶಿವಶಂಕರ್


PGK

Post a Comment

Previous Post Next Post