(ಪಶ್ಚಿಮ ಘಟ್ಟ ಡೈಲಿ ನ್ಯೂಸ್) ಆರ್‌ಟಿಐ ಕಾಯ್ದೆ ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನi

 

ಪಶ್ಚಿಮ ಘಟ್ಟ ಡೈಲಿ ನ್ಯೂಸ್) ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) 2005 ರನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಕೃತ್ಯಗಳ ವಿರುದ್ಧ ದೇಶದಾದ್ಯಂತ ನಾಗರಿಕರ ಹಕ್ಕುಗಳ ಸಂಘಟನೆಗಳು ಮತ್ತು ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫರ್ಮೇಷನ್ (ಎನ್‌ಸಿಪಿಆರ್‌ಐ) ಸೇರಿದಂತೆ 30ಕ್ಕೂ ಅಧಿಕ ಸಂಘಟನೆಗಳು ಮಾರ್ಚ್ 21, 2025ರ ಶುಕ್ರವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಆರ್‌ಟಿಐ ಕಾಯ್ದೆಯನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
2023ರಲ್ಲಿ ಆರ್‌ಟಿಐ ಕಾಯ್ದೆಗೆ ತರಲಾದ ತಿದ್ದುಪಡಿಯು ಇನ್ನೂ ಜಾರಿಗೆ ಬಂದಿಲ್ಲವಾದರೂ, ಇದು ಸರ್ಕಾರಿ ಸಂಸ್ಥೆಗಳು ನೀಡಬೇಕಾದ ಮಾಹಿತಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಅಡಿಯಲ್ಲಿ, ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಅರ್ಜಿಗಳನ್ನು ಸರ್ಕಾರಿ ಸಂಸ್ಥೆಗಳು ತಿರಸ್ಕರಿಸಬಹುದು ಎಂದು ತಿಳಿಸಲಾಗಿದೆ. “ಈ ನಿಯಮವು ಮಾಹಿತಿ ನೀಡದಿರಲು ಸರ್ಕಾರಕ್ಕೆ ಸುಲಭ ದಾರಿಯಾಗಲಿದೆ” ಎಂದು ಎನ್‌ಸಿಪಿಆರ್‌ಐ ಸಹ-ಸಂಚಾಲಕ ನಿಖಿಲ್ ದೇ ಹೇಳಿದ್ದಾರೆ. ಕೇಂದ್ರ ಸರ್ಕಾರವು ಈ ಆತಂಕಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳ ಪ್ರಕಾರ, ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ವೈಯಕ್ತಿಕ ಗೌಪ್ಯತೆ ಮೂಲಭೂತ ಹಕ್ಕಾಗಿದ್ದು, ಇದು ಆರ್‌ಟಿಐ ಕಾಯ್ದೆಯೊಂದಿಗೆ ಸಂಘರ್ಷಕ್ಕೊಳಗಾಗಿದೆ. ಆದರೆ, ಹೋರಾಟಗಾರರು ಈ ವಾದವನ್ನು ಒಪ್ಪದೆ, “ಕಾಯ್ದೆಯಲ್ಲಿ ವೈಯಕ್ತಿಕ ಮಾಹಿತಿಗೆ ಈಗಾಗಲೇ ರಕ್ಷಣೆ ಇದ್ದು, ಯಾವಾಗ ಬಹಿರಂಗಪಡಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದೆ” ಎಂದು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಎಂ.ಎಂ. ಅನ್ಸಾರಿ ತಿಳಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಶೈಕ್ಷಣಿಕ ದಾಖಲೆಗಳು ಮತ್ತು ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಆದೇಶಿಸಿದ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ.

2023ರಲ್ಲಿ ಜಾರಿಗೊಂಡ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (ಡಿಪಿಡಿಪಿ) ಕಾಯ್ದೆಯ ಮೂಲಕ ಈ ತಿದ್ದುಪಡಿಯನ್ನು ಸಂಸತ್ತು ಅಂಗೀಕರಿಸಿತು. ಈ ಕಾಯ್ದೆಯು ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಆದರೆ, ಡಿಪಿಡಿಪಿ ಕಾಯ್ದೆಗೆ ಸಂಬಂಧಿಸಿದ ಉಪ-ಕಾನೂನು ಜಾರಿಯಾಗದ ಕಾರಣ, ಈ ತಿದ್ದುಪಡಿ ಇನ್ನೂ ಜಾರಿಗೆ ಬಂದಿಲ್ಲ.

“2025ರ ಡಿಪಿಡಿಪಿ ನಿಯಮಗಳಲ್ಲಿ ಈ ತಿದ್ದುಪಡಿಯನ್ನು ಜಾರಿಗೊಳಿಸದಂತೆ ತಡೆಯಬೇಕು ಮತ್ತು ಸಂಸತ್ತು ಇದನ್ನು ರದ್ದುಗೊಳಿಸಬೇಕು” ಎಂದು ಎನ್‌ಸಿಪಿಆರ್‌ಐ ಸಹ-ಸಂಚಾಲಕಿ ಅಂಜಲಿ ಭಾರದ್ವಾಜ್ ಒತ್ತಾಯಿಸಿದ್ದಾರೆ.

ಈ ತಿದ್ದುಪಡಿಯಿಂದ ಸಾಮಾಜಿಕ ಲೆಕ್ಕಪರಿಶೋಧನೆ ಕಾರ್ಯಗಳು ತೊಂದರೆಗೊಳಗಾಗಲಿವೆ ಎಂದು ಹೋರಾಟರಾರರು ಎಚ್ಚರಿಸಿದ್ದಾರೆ. ಉದಾಹರಣೆಗೆ, ಪಡಿತರ ವಿತರಣೆಯ ದಾಖಲೆಗಳನ್ನು ಪರಿಶೀಲಿಸಿ ಮನೆ ಮನೆಗೆ ಭೇಟಿ ನೀಡುವ ತಪಾಸಣೆಗಳು ಸಾಧ್ಯವಾಗದೇ ಹೋಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. “ಆರ್‌ಟಿಐ ಕಾಯ್ದೆಯ ರಕ್ಷಣೆ ಎಂದರೆ ಪ್ರಜಾಪ್ರಭುತ್ವದ ರಕ್ಷಣೆ ಎಂದರ್ಥ” ಎಂದು ಕಾರ್ಯಕರ್ತರು ಒತ್ತಿ ಹೇಳಿದ್ದಾರೆ. ಆರ್‌ಟಿಐ ಕಾಯ್ದೆ .




PGK

Post a Comment

Previous Post Next Post